9/11/12

ಮರುನೋಟದ ಒಂದು ಮುಖ...

ಇವತ್ತು ಆಫೀಸಿನಲ್ಲಿ ಥೇಟ್-ಬಿಆರ್.ಲಕ್ಷ್ಮಣರಾವ್ ಬರೆದ 'ಫೋಟೋಗ್ರಾಫರ್' ಕವಿತೆಯಲ್ಲಿದ್ದಂಥದ್ದೇ ಸಡಗರ...

ಹೊತ್ತು ಕಳೆಯಲೆಂದು ಹಿಂದೆಂದೋ ಕಂಡು, ಹಿಡಿಸಿದ್ದ 'ಔಟ್'ಲುಕ್ ಫೋಟೋಗ್ಯಾಲರಿ' ಹೊಕ್ಕೆ...

'2010ರ ಫೋಟೋ ಕಾಂಟೆಸ್ಟ್' ಮೇಲೆ ಕ್ಲಿಕ್ ಮಾಡಿದರೆ ಪರದೆಯಲ್ಲಿ ಬಿಚ್ಚಿಕೊಂಡ ನೋಟ ಇದು...

(2009ರ ಫೆಬ್ರವರಿ: ಮಡಗಾಸ್ಕರ್'ನಲ್ಲಿ ನಡೆದ ಗಲಭೆಯ ಹೊತ್ತು.  2010ರ ವರ್ಲ್ಡ್ ಪ್ರೆಸ್ ಫೋಟೋ ಕಾಂಟೆಸ್ಟ್'ನ  'ಸ್ಪಾಟ್ ನ್ಯೂಸ್ ಸ್ಟೋರೀಸ್' ವಿಭಾಗದಲ್ಲಿ ಮೊದಲ ಪ್ರಶಸ್ತಿ ಗಿಟ್ಟಿಸಿಕೊಂಡ ಫೊಟೋ-ಕ್ಲಿಕ್ಕಿಸಿದ್ದು ವಾಲ್ಟೇರ್)


...ಗಂಟಲು ಕಟ್ಟಿದಂತಾಯ್ತು
...ಮಿಡ್ಲಿಸ್ಕೂಲಿನಲ್ಲಿ ಓದಿಕೊಂಡಿದ್ದ ಮಿತಾಲಿ ಭಟ್ಟಾಚಾರ್ಜಿಯವರ ಹಿಂದಿ ಕವಿತೆಯ ಸಾಲುಗಳು ನೆನಪಾದವು.
..."ಎಲ್ಲಿಯವರೆಗೆ ಜನ ಹಸಿವಿನಿಂದ ನರಳುತ್ತಾರೋ ಅಲ್ಲಿಯವರೆಗೆ ನಾನು ಹೊಟ್ಟೆ ತುಂಬಾ ಊಟ ಮಾಡಲಾರೆ. ಎಲ್ಲಿಯವರೆಗೆ ಜನ ಅಳುವಿನಲ್ಲಿ ಕೈತೊಳೆಯುತ್ತಿರುತ್ತಾರೋ ಅಲ್ಲಿಯವರೆಗೆ ನಾ ಹೇಗೆ ನಗಲಿ...." ಹೀಗೇನೋ ಅಸ್ಪಷ್ಟವಾದ ನೆನಪು.

ಮನಸ್ಸಲ್ಲೇನೋ ಸಂದಿಗ್ಧ..
ಆದಷ್ಟು ಊಟ ಮಾಡಿ ಕೈ ತೊಳೆದುಕೊಂಡು ಬಂದೆ..
ಇಷ್ಟೊತ್ತಾದರೂ ಮನಸ್ಸಿನ್ನೂ ಮಡಗಾಸ್ಕರ್'ನಲ್ಲೇ ಇದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ